ಶ್ರೀಮತಿ ಮದಿರಾಕ್ಷೀ ವೃತ್ತಾಂತ

ನಮ್ಮ ವಠಾರದ ಪೂರ್ಣಕುಂಭಾ ಜಂಭಾ
ಕುಳಿತರೆ ಸೋಫಾ ತುಂಬಾ
ಹರಡುವ ಭಾರೀ ನಿತಂಬಾ
ಹುಟ್ಟಿನಲ್ಲೇ ಬೆಂಕಿ ಪೊಟ್ಟಣ
ಉರಿಯಿತು ಒಳಗೇ ಹೊರಗೇ
ಪಟ್ಟಣ ಕೋಣೆ ಕಛೇರಿಗಳೊಳಗೆ
ಹರೆಯದ ಕಿಚ್ಚಿನ ನೂರೆಂಟು ಸಾಕ್ಷಿ
ಇವರು ಶ್ರೀಮತಿ ಮದಿರಾಕ್ಷಿ

ತುಟಿ ಚೂಪು ಮಾಡಿ ಕಿಸಕ್ಕನೆ ನಗುತ್ತಾರೆ
ಕುಣಿಯುತ್ತದೆ ಮಾಂಸ ಅಲ್ಲೀ ಇಲ್ಲೀ
ಕೊಳೆತ ಕ್ಯಾಬೀಜದ ವಾಸನೆ ಬರುತ್ತದೆ
ಗಟಾರದಲ್ಲಿ ಹೊರಳಿದ್ದು
ಅವರೂ ಇವರೂ ಬಾಟಲಿ ಮುಂದೆ ಕುಳಿತು
ಬ್ರಾಂದಿ ಸೋಡಾ ಐಸಿನಂತೆ ಬೆರೆತು
ಬಿಸಿ ಏರುವ ವರೆಗೂ ಆರುವವರೆಗೂ
ಮಾತಾಡಿದರು
ಆಡಿದರು
ಹೊತ್ತೇ ಹೋಗುವುದಿಲ್ಲ
ಗಲ್ಲಿಯ ಸೊಳ್ಳೆಗಳ ಕಿರುಕುಳದಲ್ಲಿ
ತೀಟೆಯ ವಿಚಾರ ಬಂದಾಗ
ಬೀದಿಯ ನಾಯಿಯ ಮರುಕದ ರಾಗ
ಹುಡುಕಿತು ಅನುರಾಗ
ಕೆದಕಿತು ಪರಾಗ
ಎಲ್ಲಾ ದೋಚಿದ ಮೇಲೂ
ಖಾಲಿ ಚೀಲ ಬೋರಲು ಬಿದ್ದು
ಸೂಸುತ್ತಿದೆ ವಠಾರದ ನಾತ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಕಿ.ಮೀಟರ್ ಉದ್ದದ ರೈಲು
Next post ಮಳೆ-ಡಗೆ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

cheap jordans|wholesale air max|wholesale jordans|wholesale jewelry|wholesale jerseys